ವ್ಯಾಪಾರ

15 ನೇ ಲೋಕಸಭಾ ಚುನಾವಣೆಯಲ್ಲಿ ಯುಪಿಏ 262 ಸೀಟು ಗೆದ್ದು ಸುಭದ್ರ ಸರಕಾರ ರಚಿಸುವ ಲಕ್ಷಣ ಕಂಡಾಕ್ಷಣ ಇಂದು ಶೇರು ಮಾರುಕಟ್ಟೆಯಲ್ಲಿ ಉಲ್ಲಾಸ ಕಂಡು ಬಂತು. ಮೊದಲ ಎರಡು ಗಂಟೆಯಲ್ಲೇ ಸೆನ್ಸೆಕ್ಸ 14000 ದ ಗಡಿ ದಾಟಿತು. ಭಾರತದ ಶೇರು ಮಾರುಕಟ್ಟೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹೆಚ್ಚಳದ ಮಿತಿಯನ್ನು ವಿಧಿಸಲಾಯಿತು. ಹಾಗೂ ದಿನದ ಮಟ್ಟಿಗೆ ಶೇರು ವ್ಯಾಪಾರವನ್ನು ನಿಲ್ಲಿಸಲಾಯಿತು.

ಆರ್ಥಿಕ ಬಿಕ್ಕಟ್ಟಿನಿಂದ ಅಮೇರಿಕವನ್ನು ಹೊರತರಲು ಪ್ರಯತ್ನಿಸುತ್ತಿರುವ ಓಬಾಮಾ ಈಗಿನ ಮಂತ್ರ "ಬೆಂಗಳೂರಿಗೆ ನೋ ಬಫೆಲೋಗೆ ಯೆಸ್" ಬೆಂಗಳೂರಿನಂತಹ ಹೊರದೇಶಗಳಲ್ಲಿ ನೌಕರಿ ಉಂಟು ಮಾಡುವ ಅಮೇರಿಕದ ಕಂಪನಿಗಳಿಗೆ ತೆರಿಗೆ ವಿನಾಯತಿ ಇಲ್ಲ ಎಂದು ಓಬಾಮಾ ಘೋಷಿಸಿದ್ದಾರೆ. ಈಗ ಆ ವಿನಾಯತಿ ಅಮೇರಿಕದ ಬಫೇಲೋ ಸಿಟಿಯಂತಹ ಜಾಗದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕಂಪನಿಗಳಿಗೆ ಹೋಗಲಿದೆ.ಮುಂದೆ ಓದು

ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಟಾಟಾ ನ್ಯಾನೋ ಟಾಟಾ ಮೋಟಾರ್ಸ್ ನ ಚೇರ್ ಮನ್ ರತನ್ ಟಾಟಾ ಬಿಡುಗಡೆ ಮಾಡಿದರು. ಎಪ್ರಿಲ್ 9 ರಿಂದ 25 2009 ರವರೆಗೆ ಬುಕಿಂಗ್ ಇರುತ್ತದೆ. ಜುಲೈ ನಲ್ಲಿ ಡೆಲಿವರಿ ಆರಂಭ. ಶೋರೂಂ ಬೆಲೆ 1 ಲಕ್ಷ ಇದ್ದು ರಸ್ತೆ ಮೇಲಿನ ಬೆಲೆ 1.2 ರಿಂದ 1.3 ಲಕ್ಷ ಇರಬಹುದು. 20 ಕೀಮಿ / ಲೀಟರ್ ಮೈಲೇಜ್ ಕೊಡಲಿದೆ.

2009ರ ಮಾರ್ಚ ಮೊದಲ ವಾರ ಹಣದುಬ್ಬರ 0.44 % ಕ್ಕೆ ಇಳಿದಿದ್ದು ಹಿಂದಿನ 20 ವರ್ಷಗಳಲ್ಲಿ ಅತಿ ಕಡಿಮೆಯಾಗಿದೆ. ಆಹಾರ ಮತ್ತು ಇಂಧನ ಬೆಲೆ ಕಡಿಮೆ ಆಗಿರುವದು ಇದಕ್ಕೆ ಕಾರಣ. ಅನುಭವಿಗಳ ಪ್ರಕಾರ ಹಣದುಬ್ಬರ ಋಣಾತ್ಮಕ ಬೆಲೆಯನ್ನು ಶೀಘ್ರದಲ್ಲಿ ಹೊಂದಲಿದೆ.

ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಮೈಕ್ರೋಸಾಫ್ಟ ನ ಬಿಲ್ ಗೇಟ್ಸ್ ಪ್ರಪಂಚದ ಅತಿ ಶ್ರೀಮಂತ ಮನುಷ್ಯ ಆಗಿದ್ದಾರೆ. ಹಿಂದಿನ ಬಾರಿ ಮೂರನೇ ಸ್ಥಾನಕ್ಕೆ ಇಳಿದಿದ್ದ ಅವರು ಆಗ 58 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದರು. ಈಗ ಬರೀ 40 ಬಿಲಿಯನ್ ಡಾಲರ್ ಹೊಂದಿದ್ದರೂ ಪ್ರಥಮ ಸ್ಥಾನದಲ್ಲಿದ್ದಾರೆ!

ಮುಂದೆ ಓದು

ಮಹಾತ್ಮಾ ಗಾಂಧಿ ಅವರು ಬಳಸುತ್ತಿದ್ದ ವಸ್ತುಗಳನ್ನು ವಿಜಯ ಮಲ್ಯ ಅವರು 1.8 ಮಿಲಯನ್ ಡಾಲರ್ ( ಸುಮಾರು 9 ಕೋಟಿ) ಗೆ ಹರಾಜಿನಲ್ಲಿ ಖರೀದಿಸಿ ಮರಳಿ ಭಾರತಕ್ಕೆ ತಂದಿದ್ದಾರೆ. ಇದರಲ್ಲಿ ಗಾಂದೀಜಿಯವರ ಚಪ್ಪಲಿ, ಪಾಕೆಟ್ ಗಡಿಯಾರ, ಕನ್ನಡಕ, ಪ್ಲೇಟ್, ಹಾಗೂ ಪಾತ್ರೆ ಸೇರಿದೆ.

ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಎಂಬ ಪ್ರಚಾರ ಪಡೆದ ಟಾಟಾ ನ್ಯಾನೋ ಮಾರ್ಚ 23 ಕ್ಕೆ ಬಿಡುಗಡೆ ಮಾಡುವದಾಗಿ ಟಾಟಾ ಮೋಟಾರ್ಸ ಇಂದು ತಿಳಿಸಿದೆ. ಎಪ್ರಿಲ್ ಎರಡನೆಯ ವಾರದಿಂದ ಬುಕಿಂಗ್ ಶುರು ಆಗಲಿದೆ.

ಸಂಬಳ ಕಡಿತ ಮಾಡಿದರೂ ಪರವಾಗಿಲ್ಲ ಆದರೆ ನೌಕರಿ ಉಳಿಸಿ ಎಂದು ವಿದೇಶಾಂಗ ಸಚಿವರಾದ ಪ್ರಣಬ್ ಮುಖರ್ಜಿಯವರು ಕೋರಿದರು. ಆರ್ಥಿಕ ಬಿಕ್ಕಟ್ಟಿನ ತೊಂದರೆಯನ್ನು ಹಂಚಿಕೊಳ್ಳಿ ಎಂದು ಭಾರತದ ಜನರಿಗೆ ಕರೆ ನೀಡಿದರು.

ಮಾರುಕಟ್ಟೆಯ ಹೂಡಿಕೆದಾರರ ಚಿನ್ನ ಖರೀದಿ ಹಾಗೂ ಮದುವೆ ಸೀಸನ್ ಕಾರಣದಿಂದ ಚಿನ್ನದ ಬೆಲೆ ಏರುತಿದ್ದು ಇಂದು (ಫೆಬ್ರವರಿ 18 2009) 10 ಗ್ರಾಂಗೆ 15582 ರೂ ತಲುಪಿದೆ!

ಸಿಟಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಕ್ರಂ ಪಂಡಿತ್ ಸಿಟಿ ಬ್ಯಾಂಕ್ ಲಾಭ ಗಳಿಸುವವರೆಗೆ ಬರೀ 1 ಡಾಲರ್ ಸಂಬಳ ತೆಗೆದುಕೊಳ್ಳುವದಾಗಿ ಶಪಥಗೈದಿದ್ದಾರೆ. ಬೋನಸ್ ಕೂಡಾ ತೆಗೆದುಕೊಳ್ಳುವದಿಲ್ಲ!! ಕೊನೆಯ 15 ತಿಂಗಳಲ್ಲಿ ಸಿಟಿ ಗ್ರುಪ್ 20 ಬಿಲಿಯನ್ ಗೂ ಹೆಚ್ಚು ನಷ್ಟಕ್ಕೆ ಒಳಗಾಗಿದೆ.

ಇತ್ತೀಚಿನ ಅನಿಸಿಕೆಗಳು
  • 'ವೃಕ್ಷ ರಾಜ'ನ ಸ್ವಗತ.....

     

     

    ಕಥೆ ತುಂಬ ತುಂಬ ಚೆನ್ನಾಗಿದೆ..........
    --sweet_suma_s@yahoo.com

  • 'tO¸´ª' - 'tO¸´ª'

    ಅದ್ಯಾವ ಭಾಷೆಯಲ್ಲಿ ಬರೆದಿರುವಿರೋ, ದೇವರಾಣೆಗೂ ಅರ್ಥವಾಗ್ಲಿಲ್ಲ ಕಣ್ರೀ !!ಮಾನವನಾಗಿ

    nimma abiprayakke thumbha danyavadagalu


    --kannadiga
  • 'ವೃಕ್ಷ ರಾಜ'ನ ಸ್ವಗತ.....

    ಓ.ಕೆ ಅದೇ ಮಾಮೂಲಿ ಪರಿಸರ ಪ್ರೇಮದ ಕಥೆ, ಇದು ಎಂದಿಗೂ ಮುಗಿಯದ ವ್ಯಥೆ. ಅಲ್ಲ ನೀವೆಲ್ಲಾ ಈ ರೀತಿ ಬ್ಲಾಗ್ ಮಾಡಿ ...
    --ಕುಮಾರ್ ಬಿ.ಡಿ

  • ಊಟಬಲ್ಲವನಿಗೆ...

    ಸಿರಿರಮಣ,

    ನಿಮ್ಮ ಈ 'ಊಟ ಬಲ್ಲವನಿಗೆ...' ಲೇಖನವನ್ನು ಓದಿದೆ. ನಿಮ್ಮ ಚಿಂತನೆ-ಬರಹ ಚೆನ್ನಗಿದೆ. ಇದರಿ...
    --ಚೆನ್ನೈ ಕನ್ನಡಿಗ

  • 'ವೃಕ್ಷ ರಾಜ'ನ ಸ್ವಗತ.....

    ಹಾಯ್ ಉಮಾಶಂಕರ್

    ನಿಮ್ಮ ಈ ಕಥೆ ಮಾಮೂಲಿ ಪ್ರೇಮ ಕಥೆಗಳನ್ನು ಓದುತ್ತಿದ್ದ ನಮಗೆ ಕೊಂಚ "ಡಿಫರೆಂಟ್" ಅನ್ನುಸು...
    --ರವಿವರ್ಮ್

  • ಊಟಬಲ್ಲವನಿಗೆ...

    ನಾಮಿಕರಾದ ಸಿರಿರಮಣರೆ;

    ತಾವುಗಳು, ಅನಾಮಿಕರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೇ ವಿಷ್ಯದಿಂದ ವಿಮುಖರಾದುದೇ...
    --ರಾಪುಮದಮಾಣಿ

  • ಊಟಬಲ್ಲವನಿಗೆ...

    ಸಮಾನವಯಸ್ಕರೋ ಗೊತ್ತಿಲ್ಲೆ, ಸಮಾನ ಮನಸ್ಕರಾಗಿದ್ದಕ್ಕೆ ಧನ್ಯವಾದ ಕೂಸೇ.

    ...
    --ಸಿರಿರಮಣ
  • ಊಟಬಲ್ಲವನಿಗೆ...

    ಆ(ಅನಾ!?)ರ್ಯರೇ, ಶುಭಾಶಯಗಳು

    ಆಹಾರ ಸಂಸ್ಕೃತಿಯ ಬಗ್ಗೆ ಬರೆದಿದ್ದರ ಸ್ಪಂದನೆಯಲ್ಲಿ ನೆಟ್ ಮಾರ್ಕೆಟಿಂಗ್ ವ್ಯ...
    --ಸಿರಿರಮಣ

  • ಭಿಕ್ಷೆ ಬೇಡುವವನಿಗೆ ಅಕ್ಕಿ ಬೆಣತಿಗೆ ಆದರೇನು, ಕೊಚ್ಚಿಗೆ ಆದರೇನು..??

    ಪ್ರಿಯ ಉಮಾಶಂಕರ್ ಹಾಗೂ idiot(???), ಪೂರಕ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ...
    --ಕೆಎಲ್ಕೆ
ಸಿಂಡೀಕೇಟ್
Syndicate content