ಪುರುಷ-ಪ್ರಕೃತಿ

ಬರೆದವರು: ಎಚ್.ಎಸ್. ಪ್ರಭಾಕರ - ಕಳುಹಿಸಿದ ದಿನ 14 ಡಿಸೆಂಬರ್ 2009

(1994 ಜನವರಿಯಲ್ಲಿ ರಚಿಸಿದ ಕವನ)

ಪುರುಷ-ಪ್ರಕೃತಿ

ಚಿರ ನೂತನಳೇ; ಚಿರ ಚೇತನಳೇ;
ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!
ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರು
ತರ್ಕಕೆ ನಿಲುಕದೆ ನಿಟ್ಟುಸಿರು..!?

ನಾ ಮರವಂತೆ; ನೀ ಲತೆಯಂತೆ...!
ಈ ಜಗದೊಳು ನಮ್ಮಯ ಸಮರುಂಟೆ!?
ಬಾ ಏರುತ ಬೆಳೆಯುವ ಬಾನಲ್ಲಿ;
ಬೇರಿಳಿಸುವ ಭೂಮಿಯ ಒಡಲಲ್ಲಿ

ಜೀವಕೆ ರಾಗವು ನೀನಾಗುವೆ;
ಎಂದೆಂದಿಗು ತಾಳವೆ ನಾನಾಗುವೆ;
ಹೃದಯದ ವೀಣೆಯ ಸುಸ್ವರ ಮೀಟಿ;
ಹಾಡುವ ಒಟ್ಟಿಗೆ ಹೊಸ ಧಾಟಿ!

ನೀ ಕಡಲಾಗಿ; ನಾ ಅಲೆಯಾಗಿ
ಎಂದಿಗು ಬಾಳುವ ಜೊತೆಯಾಗಿ
ಜೀವ ಜಾಲಕೆ ಮೂಲವೆ ಆಗಿ;
`ಸಂಧ್ಯಾ' ಸಮಯದಿ ನಿಗೂಢವಾಗಿ...!?

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಎಚ್.ಎಸ್. ಪ್ರಭಾಕರ's picture
ಗುರು, 17/12/2009 - 18:25 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಪ್ರತಿಕ್ರಿಯೆಗೆ ಧನ್ಯವಾದಗಳು

ಪ್ರತಿಕ್ರಿಯೆಗೆ ಧನ್ಯವಾದಗಳು ತೇಜಸ್ವಿನಿಯವರೆ. ನೀವು ಹೇಳಿದ್ದು ನಿಜ. ಮೇಲ್ನೋಟಕ್ಕೆ ಈಗ `ಏಳಿಗೆ'ಯಾದಂತೆ ಕಂಡರೂ ವಾಸ್ತವವಾಗಿ ಸರ್ವನಾಶದತ್ತಲೇ ಹೋಗುತ್ತಿದ್ದಾನೆ. ಮುಖ್ಯವಾಗಿ `ಭೋಗ' ಹಾಗೂ `ಸುಖ'ಗಳ ಪರಿಕಲ್ಪನೆಯೇ ಬದಲಾಗಬೇಕಾಗಿದೆ. ಆಗ ಮಾತ್ರ `ಚೈತನ್ಯ ದೇವತೆ' ಹಾಗೂ `ಜಡ ದೇವತೆ'ಗಳ ನಡುವಿನ ಭೇದ ತೊಲಗಿಸಬಹುದು! ಏನಂತೀರಿ?

ತೇಜಸ್ವಿನಿ ಹೆಗಡೆ's picture
ಗುರು, 17/12/2009 - 15:18 ರಂದು ತೇಜಸ್ವಿನಿ ಹೆಗಡೆ ಅವರು ಹೇಳುತ್ತಾರೆ
ಪ್ರಭಾಕರ್ ಅವರೆ, ಪ್ರಕೃತಿಯೊಡನೆ

ಪ್ರಭಾಕರ್ ಅವರೆ,

ಪ್ರಕೃತಿಯೊಡನೆ ಮನುಜನಿಗಿರುವ ಅವಿನಾಭಾವ ಸಂಬಂಧವನ್ನು ನವಿರಾಗಿ ಕವನದಲ್ಲಿ ಕಾಣಿಸಿದ್ದೀರಿ. ಆದರೆ ಈಗ ಮನುಷ್ಯ ಪ್ರಕೃತಿಯನ್ನು ಕೇವಲ ಭೋಗವಸ್ತುವಂತೇ ಕಾಣುತ್ತಾ ತನ್ನ ಏಳಿಗೆಯನ್ನು ಮಾತ್ರ ನೋಡುತ್ತಿದ್ದಾನೆ. ಹಾಗಾಗಿಯೇ ಪ್ರಕೃತಿ ಮುನಿಯುತ್ತಿದೆ!

ಸುಂದರ ಕವನ.

ಎಚ್.ಎಸ್. ಪ್ರಭಾಕರ's picture
ಬುಧ, 16/12/2009 - 18:09 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಹೌದು ವಿಯನ್ ಅವರೇ ನೀವು ಹೇಳಿದ್ದು

ಹೌದು ವಿಯನ್ ಅವರೇ ನೀವು ಹೇಳಿದ್ದು ಅಕ್ಷರಶಃ ನಿಜ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ವಿನಯ್_ಜಿ's picture
ಬುಧ, 16/12/2009 - 12:17 ರಂದು ವಿನಯ್_ಜಿ ಅವರು ಹೇಳುತ್ತಾರೆ
ಪ್ರಭಾಕರ ಸರ್, ನಿಮ್ಮ ಕವನ ಆ ದೇವನ

ಪ್ರಭಾಕರ ಸರ್,

ನಿಮ್ಮ ಕವನ ಆ ದೇವನ ಕೊಡುಗೆಯಾದ ಮಾನವ ಮತ್ತು ಪ್ರಕೃತಿಯಲ್ಲಿ ಇರುವ ಆ "ಮಧುರ ಸೌಮ್ಯತೆ" ಯನ್ನು ಸುಂದರವಾಗಿ ನಮಗೆ ಪರಿಚಯಿಸುತ್ತಿದೆ.

ಮನುಜ ಪ್ರಕೃತಿ ಬಾಳ್ವೆಯ ಹಾದಿಯನ್ನು ನೋಡಿ ನೆಡೆದರೆ ಇಂದು ಸಮಾಜದಲ್ಲಿ ಇರುವ ಎಷ್ಟೋ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುವುದಲ್ಲವೇ..?

ಎಚ್.ಎಸ್. ಪ್ರಭಾಕರ's picture
ಮಂಗಳ, 15/12/2009 - 23:30 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಪ್ರತಿಕ್ರಿಯೆಗೆ ಧನ್ಯವಾದ

ಪ್ರತಿಕ್ರಿಯೆಗೆ ಧನ್ಯವಾದ ಉಮಾಶಂಕರ್. ಆದರೆ ನಿಮ್ಮ ಅಭಿಪ್ರಾಯ ಸ್ಪಷ್ಟವಾಗಿ ಅರ್ಥವಾಗಲಿಲ್ಲ; ಸ್ಪಲ್ಪ ಬಿಡಿಸಿ ಹೇಳ್ತೀರ?

ಉಮಾಶಂಕರ ಬಿ.ಎಸ್'s picture
ಶುಕ್ರ, 25/12/2009 - 00:33 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ಪ್ರಶ್ನಾರ್ಥಕ ಚಿನ್ಹೆ

ಪ್ರಶ್ನಾರ್ಥಕ ಚಿನ್ಹೆ ಹಾಕಿದ್ದೀರಲ್ಲ ಅದಕ್ಕೆ ಕೇಳಿದೆ......Wink

ಎಚ್.ಎಸ್. ಪ್ರಭಾಕರ's picture
ಶುಕ್ರ, 25/12/2009 - 00:41 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಕ್ಷಮಿಸಿ ಉಮಾಶಂಕರ್! ನನ್ನ

ಕ್ಷಮಿಸಿ ಉಮಾಶಂಕರ್! ನನ್ನ ಕನವದಲ್ಲಿ ಮೊದಲು ಇದ್ದ ಬೇರೆ ಪದಗಳನ್ನು ತೆಗೆದು, ಈ `ಸಂಧ್ಯಾ ಸಮಯದಿ ನಿಗೂಢವಾಗಿ' ಸೇರಿಸಿ upload ಮಾಡಿದ್ದೆ. ಆದರೆ ಅವಸರದಲ್ಲಿ ಪಕ್ಕದಲ್ಲಿದ್ದ ಈ ಚಿನ್ಹೆಗಳನ್ನು ತೆಗೆಯದೇ ಇದ್ದುದು ಈ ಗೊಂದಲಕ್ಕೆ ಕಾರಣವಾಗಿದೆ.

ಉಮಾಶಂಕರ ಬಿ.ಎಸ್'s picture
ಮಂಗಳ, 15/12/2009 - 15:42 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
`ಸಂಧ್ಯಾ' ಸಮಯದಿ

`ಸಂಧ್ಯಾ' ಸಮಯದಿ ನಿಗೂಢವಾಗಿ...!?
ಮುಂದೆ ಇರ್ಬೇಕು ಅನ್ನಿಸುತ್ತೇ........ ಹೌದಾ ಸರ್

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
4 ಕೂಡಿಸು ಉತ್ತರ 12
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಪ್ರಭಾಕರ. ಎಚ್.ಎಸ್ ಪ್ರಭು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ಕನ್ನಡ ಭಾಷಾ ಪತ್ರಕರ್ತ. ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಹಾಸನ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪರಿಸರ ಸಂರಕ್ಷಣೆ, ಸಾಹಿತ್ಯ, ಸಂಗೀತ, ಭಾರತೀಯ ಸಂಸ್ಕೃತಿಗಳಲ್ಲಿ \ಆಸಕ್ತ ಹಾಗೂ ಸಕ್ರಿಯನೂ ಆಗಿದ್ದೇನೆ. ಲೇಖಕನೂ ಹೌದು.
ಇವರ ವಿಸ್ಮಯ ಪುಟ